ಕನ್ನಡ ಸಿನಿಮಾಗಳು ಜಿಲ್ಲೆಗಳಲ್ಲಿ ಬಿಡುಗಡೆಯಾದ ನಂತರ ಪ್ರವಾಸ ಕೈಗೊಳ್ಳುವುದು ಈಗಿನ ಹವ್ಯಾಸ. ಇದಕ್ಕೂ ಮುನ್ನ ಧ್ವನಿಸುರುಳಿ ಬಿಡುಗಡೆಯನ್ನು ಜಿಲ್ಲೆಗಳಲ್ಲಿ ಹಮ್ಮಿಕೊಂಡು ಮನರಂಜನೆ ಮುಖಾಂತರ ಪ್ರೇಕ್ಷಕರನ್ನು ರಂಜಿಸುವುದು ನಡೆಯುತ್ತಾ ಬಂದಿದೆ. ಆದರೆ ಕರ್ನಾಟಕದ ಅಂಚಿನ ಜಿಲ್ಲೆಯಾದ ಬೀದರ್ನಲ್ಲಿ ಧ್ವನಿಸುರುಳಿ ಬಿಡುಗಡೆ ಮಾಡಿದ ಹೆಗ್ಗಳಿಕೆ ’ಪೇಪರ್ ದೋಣಿ’ ಚಿತ್ರಕ್ಕೆ ಸಲ್ಲುತ್ತದೆ.
ಕಳೆದ ೧೭ರ ಸಂಜೆ ಬೀದರ್ನ ಏಕೈಕ ರಂಗಮಂದಿರದಲ್ಲಿ ಶ್ರೀ ರಾಜರಾಜೇಶ್ವರಿ ಕ್ರಿಯೇಷನ್ಸ್ ’ಪೇಪರ್ ದೋಣಿ’ ಚಿತ್ರದ ಧ್ವನಿಸುರುಳಿಯನ್ನು ’ರಾಜರಾಜೇಶ್ವರಿ’ ಆಡಿಯೋ ಸಂಸ್ಥೆ ಪ್ರಾರಂಬಿಸುವುದೊಂದಿಗೆ ಧ್ವನಿಸುರುಳಿಯು ಪೇಪರ್ ಆಯುವ ಬ್ಯಾಗ್ನಿಂದ ಹೊರತೆಗೆಯಲಾಯಿತು.